ಬಾಬ್ರಿ ಮಸೀದಿ ಧ್ವಂಸ; 17ವರ್ಷದ ನಂತ್ರ ವರದಿ ಸಲ್ಲಿಕೆ

ದೇಶಾದ್ಯಂತ ಕೋಮುದಳ್ಳುರಿಗೆ ಕಾರಣವಾಗಿದ್ದ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷಗಳ ಕಾಲ ಸುದೀರ್ಘವಾಗಿ ತನಿಖೆ ನಡೆಸಿದ ಲಿಬೆರಾನ್ ಆಯೋಗ ಕೊನೆಗೂ ಮಂಗಳವಾರ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಅವರಿಗೆ ವರದಿ ಸಲ್ಲಿಸಿದೆ. 1992ರಲ್ಲಿ ಬಾಬ್ರಿ ಮಸೀದಿಯನ್ನು ಸಂಘಪರಿವಾರ ಧ್ವಂಸಗೊಳಿಸಿದ ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಎಂ.ಎಸ್.ಲಿಬೆರಾನ್ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು. ಆದರೆ ಆಯೋಗ ಬಾಬ್ರಿ ಧ್ವಂಸ ವಿಚಾರಣೆಗಾಗಿ ಸರಾಸರಿ 17ವರ್ಷಗಳನ್ನು ತೆಗೆದುಕೊಂಡಿದೆ. ತನಿಖೆಯ ಸಂದರ್ಭದಲ್ಲಿ ಅಂತಿಮ ವರದಿ ಸಲ್ಲಿಕೆಗಾಗಿ ಆಯೋಗ 48 ಬಾರಿ ವಿಸ್ತರಣೆಯನ್ನು ಪಡೆದುಕೊಂಡಿತ್ತು. ಇಂದು ಬೆಳಿಗ್ಗೆ ಲಿಬೆರಾನ್ ಅವರು ಗೃಹ ಸಚಿವ ಪಿ.ಚಿದಂಬರಂ ಅವರ ಸಮ್ಮುಖದಲ್ಲಿ ಕೊನೆಗೂ ಬಾಬ್ರಿ ಧ್ವಂಸ ಪ್ರಕರಣದ ತನಿಖೆಯ ಅಂತಿಮ ವರದಿಯನ್ನು ಪ್ರಧಾನಿ ಸಿಂಗ್‌ಗೆ ಸಲ್ಲಿಸಿದರು. ಆದರೆ ವರದಿಯಲ್ಲಿನ ಅಂಶಗಳು ಸದ್ಯಕ್ಕೆ ಲಭ್ಯವಾಗಿಲ್ಲ. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿನ ಐತಿಹಾಸಿಕ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಇದರಿಂದಾಗಿ ದೇಶಾದ್ಯಂತ ಕೋಮುದಳ್ಳುರಿ ಹೊತ್ತಿ ಉರಿದಿತ್ತು. ಘಟನೆಯ 10ದಿನಗಳಲ್ಲಿಯೇ ತನಿಖೆಗಾಗಿ ಆಯೋಗವನ್ನು ನೇಮಕ ಮಾಡಲಾಗಿತ್ತು. ಆದರೆ ದೇಶದಲ್ಲಿ ನಡೆದ ಘಟನೆಯೊಂದರ ತನಿಖೆಗಾಗಿ ಅತಿ ದೀರ್ಘಾವಧಿ ಸಮಯವನ್ನು ಲಿಬೆರಾನ್ ಆಯೋಗ ತೆಗೆದುಕೊಂಡಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ನಿವೃತ್ತ ನ್ಯಾಯಾಧೀಶ ಲಿಬೆರಾನ್ ಹಾಗೂ ಆಯೋಗದ ಇತರ ಸದಸ್ಯರಿಗೆ ನೀಡಿದ ಸಂಬಳದ ವೆಚ್ಚ ಸೇರಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ಅಂದಾಜು 8ಕೋಟಿ ರೂಪಾಯಿ ವ್ಯಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಹಲವು ಮಂದಿಯ ಹೇಳಿಕೆಯನ್ನು ಆಯೋಗ ದಾಖಲಿಸಿಕೊಂಡಿದೆ.

ಆಡ್ವಾಣಿ-ಬಜರಂಗದಳ ಪಾತ್ರ ಬಹಿರಂಗ:ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಯ ಅಂತಿಮ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಘಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಸಂಘಪರಿವಾರದ ಪಾತ್ರಗಳ ಬಣ್ಣ ಬಯಲಾಗಲಿದೆ.

ಗಲ್ಲಿಗೇರಲು ಸಿದ್ದ-ಉಮಾ ಭಾರತಿ:ವರದಿ ಸಲ್ಲಿಕೆ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಫೈಯರ್ ಬ್ರ್ಯಾಂಡ್ ಉಮಾ ಭಾರತಿ ಅವರು, ಬಾಬ್ರಿ ಮಸೀದಿ ಧ್ವಂಸವನ್ನು ಸಮರ್ಥಿಸಿಕೊಂಡಿದ್ದು, ಇದಕ್ಕಾಗಿ ತಾನು ಗಲ್ಲಿಗೇರಲು ಕೂಡ ಸಿದ್ದ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ವಿವಾದದ ಕಿಚ್ಚನ್ನು ಹಚ್ಚಿದ್ದಾರೆ.

ಕೆಲವು ವ್ಯಕ್ತಿಗಳಿಂದಾಗಿ ವರದಿ ವಿಳಂಬ: ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವರದಿ ಸಲ್ಲಿಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಯೋಗ ಲಿಬೆರಾನ್, ಕೆಲವು ವ್ಯಕ್ತಿಗಳ ಅಸಹಕಾರದಿಂದಾಗಿ ವರದಿ ಸಲ್ಲಿಕೆಗೆ ವಿಳಂಬವಾಗಿದೆ ಎಂದ ಅವರು, ಸಂಸತ್‌ನಲ್ಲಿ ವರದಿ ಮಂಡಿಸಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಅದಕ್ಕೂ ಮುನ್ನ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬಿಜೆಪಿ ಗರಂ: ವರದಿ ವಿಳಂಬಕ್ಕೆ ಭಾರತೀಯ ಜನತಾ ಪಕ್ಷ ಕಾರಣ ಎಂಬ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ವರದಿ ವಿಳಂಬಕ್ಕೆ ನಾವು ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ನಾವು ನಿರಪರಾಧಿಗಳು, ಅಲ್ಲದೇ ಸಕಾಲಕ್ಕೆ ನಾವು ವಿವರಣೆ ನೀಡಲು ಆಯೋಗದ ಮುಂದೆ ಹಾಜರಾಗಿರುವುದಾಗಿಯೂ ಹೇಳಿದರು. ಆದರೂ ದೇಶದ ಬಹುಸಂಖ್ಯಾತ ಹಿಂದೂಗಳ ಇಚ್ಛೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ನಮ್ಮ ಗುರಿ ಎಂದರು.

http://kannada.webdunia.com/newsworld/news/national/0906/30/1090630034_1.htm

Add comment July 3, 2009

ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ

ಅಮೆರಿಕದ ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸುತ್ತಿರುವ ಮಹತ್ವದ ನಿರ್ಧಾರವನ್ನು ಎಫ್‌ಬಿಐ ನಿರ್ದೇಶಕ ರೋಬರ್ಟ್ ಮುಲ್ಲೆರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಸಂಘಟನೆ, ಮುಲ್ಲಾಗಳು ಉಗ್ರಗಾಮಿ ಸಂಘಟನೆಗಳೊಂದಿಗೆ ಕೈಜೋಡಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸಮರ್ಥನೆ ನೀಡಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಮಸೀದಿಗಳಲ್ಲಿ ಏನು ಚಟುವಟಿಕೆ ನಡೆಯುತ್ತಿದೆ? ಯಾರೊಂದಿಗೆ ಸಂಪರ್ಕ ಇದೆ? ಅಲ್ಲಿ ಬಂದು-ಹೋಗುವವರ ಬಗ್ಗೆ ನಿಗಾ ಇತ್ಯಾದಿ ವಿಷಯಗಳ ಜಾಡು ಹಿಡಿಯುವ ನಿಟ್ಟಿನಲ್ಲಿ ಎಫ್‌ಬಿಐ ಬೇಹುಗಾರಿಕೆಯನ್ನು ನಿಯೋಜಿಸಿದೆ. ನಾವು ಸ್ಥಳಗಳ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ, ಕೇವಲ ವೈಯಕ್ತಿಕ ನೆಲೆಯಲ್ಲಿ ಮಸೀದಿಗಳಲ್ಲಿನ ಮುಲ್ಲಾಗಳು, ಸಂಘಟನೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಮುಲ್ಲೆರ್ ತಿಳಿಸಿದ್ದಾರೆ.

ಅಮೆರಿಕದ ಮಸೀದಿ, ಇಸ್ಲಾಂ ಸಂಘಟನೆ ಹಾಗೂ ಮುಲ್ಲಾಗಳ ಮೇಲೆ ಎಫ್‌ಬಿಐ ಬೇಹುಗಾರಿಕೆಯನ್ನು ಇಟ್ಟು ನಿಗಾ ವಹಿಸುತ್ತಿರುವ ಬಗ್ಗೆ ಮಿಚಿಗನ್ ಮುಸ್ಲಿಂ ಸಂಘಟನೆಯೊಂದು ಕಾನೂನು ಇಲಾಖೆಗೆ ದೂರಿರುವ ಬೆನ್ನಲ್ಲೇ ಮುಲ್ಲೆರ್ ಈ ಹೇಳಿಕೆ ಹೊರಬಿದ್ದಿದೆ.

ಮಸೀದಿಗಳಲ್ಲಿ ಅಥವಾ ಅಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗೆ ಸಂಬಂಧಿಸಿದಂತೆ ಯಾವುದಾದರು ಸಾಕ್ಷಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತಲ್ಲಿ ನಾವು ಅವರನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿರುವ ಅವರು, ನಾವು ಆ ಕಾರ್ಯವನ್ನು ಮುಂದುವರಿಸುವುದಾಗಿ ಖಚಿತಪಡಿಸಿದ್ದಾರೆ.

ನಾವು ಮುಸ್ಲಿಂ ವಿರೋಧಿಗಳಲ್ಲ, ಅಮೆರಿಕದಲ್ಲಿರುವ ಮುಸ್ಲಿಂ ಬಾಂಧವರು ತುಂಬಾ ಒಳ್ಳೆಯವರು ಆದರೆ ಮುಂದೆ ನಡೆಯುವ ಅನಾಹುತದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಇಂತಹ ತನಿಖೆಗೆ ಮುಂದಾಗಿರುವುದಾಗಿ ವಿವರಿಸಿದ್ದಾರೆ.

ಭಾರತದ ಹಲವು ರಾಜ್ಯಗಳಲ್ಲಿನ ಮಸೀದಿಗಳಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಕುಮ್ಮುಕ್ಕು ನೀಡಲಾಗುತ್ತಿದೆ ಹಾಗೂ ಅಲ್ಲಿನ ಮುಲ್ಲಾಗಳ ಬೆಂಬಲ ಕೂಡ ಇದೆ ಎಂಬ ಕುರಿತು ಆಯೋಗದ ಕೆಲವು ವರದಿಗಳು ತಿಳಿಸಿವೆ. ಆದರೂ ಆಡಳಿತಯಂತ್ರ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಭಯೋತ್ಪಾದನೆ ಚಟುವಟಿಗಳಿಗೆ ತಡೆಯೊಡ್ಡಲು ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತ ಬಂದಿವೆ.

Add comment June 18, 2009

ಲಾಡೆನ್‌ಗೆ ‘ಸರ್’ಪದವಿ ನೀಡಲು ಒತ್ತಾಯ

ಭಾರತ ಸಂಜಾತ ಸಾಹಿತಿ ರಶ್ದಿಯವರಿಗೆ ನೈಟ್‌ಹುಡ್ ಪ್ರಶಸ್ತಿ ನೀಡಿದ್ದರಿಂದ,ಇದೀಗ ಮುಸ್ಲಿ ರಾಷ್ಟ್ರಗಳು ಅಲ್-ಖೈದಾ ಮುಖಂಡ ಲಾಡೆನ್ ಅವರಿಗೆ ‘ಸರ್’ ಪದವಿ ನೀಡಬೇಕೆಂದು ಪಾಕ್ ಧಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.

ಬ್ರಿಟನ್ ಸರಕಾರ, ಮುಸ್ಲಿಂ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾದ ಸಲ್ಮಾನ್ ರಶ್ದಿಯವರಿಗೆ ನೈಟ್‌ಹುಡ್ ಪ್ರಶಸ್ತಿ ನೀಡಿ ಮುಸ್ಲಿಂರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ , ಬ್ರಿಟನ್ ಸರಕಾರದ ನಾಚಿಕೇಗೇಡಿತನದ ಕೃತ್ಯಕ್ಕೆ ಅಲ್-ಖೈದಾ ನಾಯಕ ಒಸಾಮ ಬಿನ್ ಲಾಡೆನ್ ಹಾಗೂ ಮೊಹಮ್ಮದ್ ಮುಲ್ಲಾ ಉಮರ್ ಅವರಿಗೆ ‘ಸರ್’ ಪದವಿ ನೀಡಿ ಗೌರವಿಬೇಕೆಂದು ಸಂಸತ್ ಸದಸ್ಯ, ತಾಲಿಬಾನ್‌ ಬೆಂಬಲಿತ ಜಮಾತೆ ಉಲೇಮಾ -ಇಸ್ಲಾಂ ಮುಖಂಡ ಸಮೀ ಉಲ್ ಹಕ್ ಮುಸ್ಲಿಂ ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ.

ಯುರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳು ವಿವಾದಾತ್ಮಕ ಮುಸ್ಲಿಂ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ಮುಸ್ಲಿಂರಲ್ಲಿ ಉದ್ದೇಶ ಪೂರ್ವಕವಾಗಿ ಪ್ರತ್ಯೇಕತವಾದವನ್ನು ಬೆಳೆಸುತ್ತಿದ್ದಾರೆ ಎಂದು ಮುಖಂಡ ಸಮೀ ಉಲ್ ಹಕ್ ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆ ನಿರ್ಮೂಲನೆಯಲ್ಲಿ ಅಮೆರಿಕ ದೇಶಕ್ಕೆ ನೀಡಿದ ಬೆಂಬಲವನ್ನು ಕೈ ಬಿಡಬೇಕು ಎಂದು ಪಾಕ್ ಸರಕಾರವನ್ನು ಆಗ್ರಹಿಸಿದರು

Add comment June 18, 2009

ಭಯೋತ್ಪಾದನೆ ಇಸ್ಲಾಂ ವಿರೋಧಿ: ದಾರುಲ್ ಉಲೇಮಾ

ಭಯೋತ್ಪಾದನೆಯು ಇಸ್ಲಾಮಿ ತತ್ವಗಳಿಗೆ ವಿರೋಧವಾದುದು ಎಂಬ ಸ್ಪಷ್ಟವಾಗಿ ಹೇಳಿರುವ ರಾಷ್ಟ್ರದ ಉನ್ನತ ಮುಸ್ಲಿಂ ಸಂಘಟನೆಗಳು, ಇದು ಇಸ್ಲಾಮ್‌ನ ಶಾಂತಿ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿ ಸೋಮವಾರ ನಡೆಸಿರುವ ಸಭೆಯಲ್ಲಿ ಮುಸ್ಲಿಂ ಸಂಘಟನೆಗಳು ಈ ನಿರ್ಧಾರ ಕೈಗೊಂಡಿವೆ. ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಮ್ ಸಂಘಟಿಸಿದ್ದ ಭಯೋತ್ಪಾದನಾ ಸಮ್ಮೇಳನದಲ್ಲಿ ರಾಷ್ಟ್ರಾದ್ಯಂತದ ವಿವಿಧ ಪಂಥಗಳ ಹಾಗೂ ಪಂಗಡಗಳ ಇಸ್ಲಾಮಿಕ್ ಧರ್ಮಗುರುಗಳು, ವಿದ್ವಾಂಸರು, ಪಂಡಿತರು ಮತ್ತು ಧಾರ್ಮಿಕ ನಾಯಕರು ಪಾಲ್ಗೊಂಡಿದ್ದರು.

ಇಸ್ಲಾಂ ತಂಟೆಕೋರ, ಗಲಭೆ ಎಬ್ಬಿಸುವ ಮತ್ತು ಅತ್ಯಂತ ಪಾಪಕರ್ಮ ಮತ್ತು ಅಪರಾಧಗಳನ್ನು ಎಸಗುತ್ತಿದೆ ಎಂದು ಪರಿಗಣಿಸಲಾಗಿದೆ. ಅಲ್ಲದೆ ಕೆಲವೊಮ್ಮೆ ಅಸಹಿಷ್ಣುತೆಯ ಗೂಬೆಯನ್ನೂ ಸಹಾ ಇಸ್ಲಾಂ ಮೇಲೆ ಕೂರಿಸಲಾಗುತ್ತಿದೆ” ಎಂದು ಈ ಘೋಷಣೆಯಲ್ಲಿ ಹೇಳಲಾಗಿದೆ.

ಇಸ್ಲಾಂ ವಿರೋಧಿ ಹಾಗೂ ರಾಷ್ಟ್ರವಿರೋಧಿ ಪಡೆಗಳಿಂದ ಪ್ರಭಾವ ಹೊಂದಬಾರದು ಎಂದು ಇಸ್ಲಾಮಿಕ್ ವಿದ್ವಾಂಸರನ್ನು ಘೋಷಣೆಯಲ್ಲಿ ಕೇಳಿಕೊಳ್ಳಲಾಗಿದೆ. ಭಯೋತ್ಪಾದನೆ, ಭಯೋತ್ಪಾದಕರು ಅಥವಾ ಇಂತಹ ಯಾವುದರೊಂದಿಗೂ ನಮಗೆ ಸಂಪರ್ಕವಿಲ್ಲ. ನಾವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಭಯೋತ್ಪಾದನೆಯು ಇಸ್ಲಾಂ ತತ್ವಗಳಿಗೆ ಸಂಪೂರ್ಣ ವಿರೋಧವಾಗಿದೆ. ಇಸ್ಲಾಂ ಪ್ರೀತಿ ಮತ್ತು ಶಾಂತಿಯ ನಂಬುಗೆಯನ್ನು ಪ್ರತಿಪಾದಿಸುತ್ತದೆ” ಎಂದು ದಾರುಲ್ ಉಲೇಮ್‌ನ ಮುಖ್ಯಸ್ಥ ಮೌಲಾನ ಮರ್ಗೂಬ್-ಉರ್ ರೆಹ್ಮಾನ್ ಹೇಳಿದ್ದಾರೆ

Add comment June 18, 2009

ಜೂ2ರಂದು ಕಮಲಾದಾಸ್ ಅಂತ್ಯಕ್ರಿಯೆ

ಖ್ಯಾತ ಮಲಯಾಳಿ ಲೇಖಕಿ ಕಮಲಾ ದಾಸ್ ಸುರಯ್ಯ(75) ಅವರು ಭಾನುವಾರ ಮುಂಜಾನೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಎಪ್ರಿಲ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಮಲಾ ಅವರು ಮೂವರು ಪುತ್ರರನ್ನು ಅಗಲಿದ್ದಾರೆ.

ಮಲಯಾಳಿ ಹಾಗೂ ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರ ಸಮ್ಮರ್ ಇನ್ ಕಲ್ಕತ್ತಾ, ಮೈ ಸ್ಟೋರಿ, ಅಲ್ಪಬೆಟ್ ಆಫ್ ಲಸ್ಟ್, ಮೊದಲಾದ ಕೃತಿಗಳಿಂದ ಹೆಸರು ಗಳಿಸಿದ್ದರು.

ಮೃತ ಸಾಹಿತಿ ಕಮಲಾ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಾಹಿತ್ಯಿ ಪ್ರಶಸ್ತಿಗಳನ್ನು ಪಡೆದಿದ್ದರು. ಇತ್ತೀಚೆಗೆ ಇಲ್ಲಿನೆಲೆಸಿದ್ದ ಅವರು ಏಕಾಂತ ಜೀವನ ಸಾಗಿಸುತ್ತಿದ್ದರು.

1934ರ ಮಾರ್ಚ್ 31ರಂದು ಜನಿಸಿದ್ದ ಕಮಲಾದಾಸ್ ಅವರು ಕಳೆದ 1999ರಲ್ಲಿ ತಮ್ಮ 65ನೆ ವಯಸ್ಸಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಸುರಯ್ಯ ಎಂದು ಹೆಸರಿರಿಸಿಕೊಂಡಿದ್ದರು.

ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಕಮಲಾದಾಸ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಜೂನ್ ಎರಡರಂದು ಮಾಡಲಾಗುವುದು ಎಂದು ಕೇರಳದ ಸಾಂಸ್ಕೃತಿಕ ಸಚಿವ ಎಂ.ಎ. ಬೇಬಿ ಅವರು ಹೇಳಿದ್ದಾರೆ.

ಅವರ ಅಂತ್ಯಕ್ರಿಯೆಯನ್ನು ಪಾಲಯಂ ಜುಮಾ ಮಸೀದಿಯಲ್ಲಿ ನಡೆಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಿಳಿಸಿದರು.

ಸೋಮವಾರ ಅವರ ಮೃತದೇಹವನ್ನು ನೆಡುಂಬಸ್ಸೆರಿಗೆ ವಿಮಾನದಲ್ಲಿ ತರಲಾಗುವುದು ಮತ್ತು ಆಳಪುಜಾ ಹಾಗೂ ಕೊಲ್ಲಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುವುದು.

ಕಮಲಾ ಅವರ ಇಚ್ಚೆಯಂತೆ ಮುಸ್ಲಿಂ ಧರ್ಮದ ವಿಧಿವಿಧಾನಗಳಿಗನುಗುಣವಾಗಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ

Add comment June 18, 2009

ಅಮೆರಿಕ, ಮುಸ್ಲಿಂರ ನೂತನ ಶಕೆಗೆ ಒಬಾಮಾ ಕರೆ

ಅಮೆರಿಕ ಮತ್ತು ಮುಸ್ಲಿಮರ ನಡುವೆ ನೂತನ ಶಕೆಯ ಆರಂಭಕ್ಕೆ ಅಧ್ಯಕ್ಷ ಬರಾಕ್ ಒಬಾಮಾ ಕರೆನೀಡಿದ್ದಾರೆ. ಜಗತ್ತಿನಾದ್ಯಂತ ಹಿಂಸಾತ್ಮಕ ಉಗ್ರವಾದಕ್ಕೆ ನಾವು ಒಂದಾಗಿ ಪ್ರತಿರೋಧ ತೋರಬೇಕೆಂದು ಹೇಳಿದ ಒಬಾಮಾ ಮಧ್ಯಪೂರ್ವದಲ್ಲಿ ಶಾಂತಿ ಸ್ಥಾಪನೆಗೆ ನಿರಂತರ ಪ್ರಯತ್ನ ಮಾಡಬೇಕೆಂದು ಅವರು ನುಡಿದರು.

ಅಮೆರಿಕ ಮತ್ತು ಮುಸ್ಲಿಂ ಜಗತ್ತಿನ ನಡುವೆ ಇರುವ ಅನುಮಾನ ಮತ್ತು ಅಪನಂಬಿಕೆಯ ಚಕ್ರಕ್ಕೆ ತೆರೆಎಳೆಯಬೇಕು ಎಂದು 2001ರಂದು ಅಮೆರಿಕದ ಮೇಲೆ ದಾಳಿ ಮತ್ತು ಇರಾಕ್ ಯುದ್ಧದ ಬಳಿಕ ಬಾಂಧವ್ಯದ ಕೊಂಡಿಯನ್ನು ಪುನಃ ಬೆಸೆಯುವ ತಮ್ಮ ಭಾಷಣದಲ್ಲಿ ಒಬಾಮಾ ಹೇಳಿದರು.ಕೈರೊದಲ್ಲಿ ಬಹುಕಾಲದಿಂದ ನಿರೀಕ್ಷಿಸಿದ್ದ ತಮ್ಮ ಭಾಷಣದಲ್ಲಿ ಒಬಾಮಾ ತಮ್ಮ ಮುಸ್ಲಿಂ ಬೇರನ್ನು ಕುರಿತು ಪ್ರಸ್ತಾಪಿಸಿದರು.

ಅಮೆರಿಕಕ್ಕೆ ಮುಸ್ಲಿಮರು ಮಹಾನ್ ಕೊಡುಗೆ ನೀಡಿದ್ದಾರೆಂದು ಶ್ಲಾಘಿಸಿದರು. ಸಾರ್ವತ್ರಿಕ ಧಾರ್ಮಿಕ ಸ್ವಾತಂತ್ರ್ಯವಿರಬೇಕೆಂದು ಹೇಳಿದ ಅವರು, ಎರಡು ಸಂಸ್ಕೃತಿಗಳು ಪೈಪೋಟಿಯಲ್ಲಿ ಇರಬಾರದೆಂದು ಹೇಳಿದರು. ಜಾಗತೀಕರಣಕ್ಕೆ ಮುಸ್ಲಿ ಜಗತ್ತು ಬೆದರಬಾರದು. ಅಭಿವೃದ್ಧಿ ಮತ್ತು ಸಂಪ್ರದಾಯದ ನಡುವೆ ಸಂಘರ್ಷವಿರಬಾರದೆಂದು ನುಡಿದರು.

ಇಸ್ಲಾಂ ಧರ್ಮದ ನಕಾರಾತ್ಮಕ ಪಡಿಯಚ್ಚುಗಳು ಎಲ್ಲೇ ಕಂಡರೂ ಅದರ ವಿರುದ್ಧ ಅಮೆರಿಕ ಅಧ್ಯಕ್ಷರಾಗಿ ಹೋರಾಟ ಮಾಡುವುದು ತಮ್ಮ ಜವಾಬ್ದಾರಿ ಎಂದು ಹೇಳಿದರು. ಆದರೆ ಹಿಂಸಾತ್ಮಕ ಮುಸ್ಲಿಂ ಉಗ್ರವಾದವನ್ನು ಮಾನವಜನಾಂಗ ಒಪ್ಪತಕ್ಕದ್ದಲ್ಲವೆಂದು ನುಡಿದರು. ಹಿಂಸಾತ್ಮಕ ಉಗ್ರವಾದದ ನಿರ್ಮ‌ೂಲನೆಗೆ ಇಸ್ಲಾಂ ಸಮಸ್ಯೆಯ ಭಾಗವಲ್ಲ. ಇಸ್ಲಾಂ ಶಾಂತಿ ಪ್ರವರ್ತನೆಗೆ ಭಾಗವೆಂದು ನುಡಿದರು

1 comment June 18, 2009


My Own Sites

Categories

Recent Posts

RSS latest news

Pages

Blog Stats